ಭಾನುವಾರ, ಅಕ್ಟೋಬರ್ 23, 2016

ಹೆಸರುಬೇಳೆ ಪಾಯಸ :

ಹೆಸರುಬೇಳೆ ಪಾಯಸವನ್ನು ಶಿವರಾತ್ರಿ ಹಬ್ಬಕ್ಕೆ ನೈವೇದ್ಯಕ್ಕೆ ಮಾಡುವ ಪದ್ಧತಿ ಕೆಲವೆಡೆ ಇದೆ. ಈ ಪಾಯಸ ತಿನ್ನುವುದರಿಂದ ರಾತ್ರಿ ಜಾಗರಣೆ ಮಾಡಿದರೆ ದೇಹದ ಉಷ್ಣತೆ ಜಾಸ್ತಿಯಾಗದೇ ತಂಪಾಗಿರುತ್ತದೆ. ಬೇರೆ ಯಾವುದೇ ಹಬ್ಬಕ್ಕೂ ನೈವೇದ್ಯಕ್ಕೆ ಮಾಡಬಹುದು. 
ಸಾಮಗ್ರಿಗಳು:
ಹೆಸರುಬೇಳೆ 1.5 ಕಪ್,
ಬೆಲ್ಲ 1/2 ಕಪ್,
ಸಕ್ಕರೆ 1/2 ಕಪ್,
ತೆಂಗಿನ ತುರಿ 1 ಕಪ್,
ಹಾಲು 1/2 ಕಪ್,
ಏಲಕ್ಕಿ ಪುಡಿ 1/4 ಚಮಚ,
ಗೋಡಂಬಿ 8-10,
ಉಪ್ಪು 1/4 ಚಮಚ 

ವಿಧಾನ :
ಹೆಸರುಬೇಳೆ ತೊಳೆದುಕೊಂಡು ನೀರು ಹಾಕಿ ಕುಕ್ಕರ್ ನಲ್ಲಿ ಎರಡು ಕೂಗು ಕೂಗಿಸಿ ಅಥವಾ ಹಾಗೆಯೇ ಪಾತ್ರೆಯಲ್ಲಿ ಹಾಕಿ ಒಲೆಯ ಮೇಲಿಟ್ಟು ಬೇಯಿಸಬಹುದು. ಬೇಳೆ ಪೂರ್ತಿ ಕರಗುವಷ್ಟು ಬೇಯಿಸಬಾರದು,  ತೆಂಗಿನ ತುರಿಗೆ ಏಲಕ್ಕಿ ಪುಡಿ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಬೆಂದ ಹೆಸರುಬೇಳೆಗೆ ಹಾಲು, ರುಬ್ಬಿದ ತೆಂಗಿನಕಾಯಿ, ಗೋಡಂಬಿ ಚೂರುಗಳು, ಸಕ್ಕರೆ ಮತ್ತು ಬೆಲ್ಲ ಹಾಕಿ ಬೇಕಿದ್ದರೆ ಸ್ವಲ್ಪ ನೀರು ಹಾಕಿ ಕುದಿಯಲು ಬಿಡಿ. ಹೆಸರುಬೇಳೆ ಬೇಗ  ತಳಹಿಡಿಯುತ್ತದೆ, ಆಗಾಗ ಕಲಕುತ್ತಿರಿ. ಚೆನ್ನಾಗಿ  ಕುದಿ ಬಂದ ಮೇಲೆ ಉರಿ ಆರಿಸಿ. ಬಿಸಿ ಬಿಸಿ ಪಾಯಸಕ್ಕೆ ತುಪ್ಪ ಹಾಕಿಕೊಂಡು ಸವಿದರೆ ಆಹಾ ...! 


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ